ಬೆನಕೆಪಳ್ಳಿಯ ರೇವಣಸಿದ್ದಪ್ಪರೆಡ್ಡಿ (32) ಮೃತ ವ್ಯಕ್ತಿ. ಜೀಪ್ನಿಂದ ಇಳಿಯುವಾಗ ಬಿದ್ದರೂ ವ್ಯಕ್ತಿಯ ನೆರವಿಗೆ ಬಾರದ ಚಾಲಕ ಜೀಪ್ ಓಡಿಸಿಕೊಂಡು ಹೋಗಿದ್ದಾನೆ. ಈ ಕುರಿತು ಭಾನುವಾರ ಚಾಲಕನ ನಿರ್ಲಕ್ಷ್ಯದ ವಿರುದ್ಧ ಚಿಂಚೋಳಿ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ರಾಜಶೇಖರ ರಾಠೋಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.