ಸೇನೆ ಅಧ್ಯಕ್ಷ ದತ್ತು ಭಾಸಗಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ, ಪ್ರಮುಖರಾದ ಜಗನ್ನಾಥ ಸೂರ್ಯವಂಶಿ, ದಶರಥ ಕಣಮಸ್ ಇದ್ದರು. ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಸಮಾಜ ಸೇವಕ ಡಾ.ಎ.ಎಸ್.ಭದ್ರಶೆಟ್ಟಿ, ಮಂಜುನಾಥ ಕಂಬಾಳಿಮಠ, ಸಲ್ಮಾನ ಪಟೇಲ್, ಪ್ರಗತಿಪರ ಕೃಷಿಕ ಆದಿನಾಥ ಹೀರಾ, ಪತ್ರಕರ್ತರಾದ ಶರಣಯ್ಯ ಹಿರೇಮಠ, ಪ್ರಭುಲಿಂಗ ನೀಲೂರೆ ಸೇರಿದಂತೆ ಹಲವರಿಗೆ ಅಮೂಲ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.