'ಬೆಂಗಳೂರಿನಲ್ಲಿ ತುರ್ತಾದ ಕೆಲಸ ಇತ್ತು. ಮಾರ್ಚ್ 21ಕ್ಕೆ ಕುಟುಂಬದ ಸದಸ್ಯರ ಜೊತೆ ನಾನು ಪ್ರಯಾಣಿಸಬೇಕಿತ್ತು. ಆದರೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಬಂದ್ ಆಗಿವೆ. ಅಲ್ಲಿ ಈಗ ಹೋದರೆ ಪ್ರಯೋಜನ ಇಲ್ಲ. ಕೆಲಸವೂ ಆಗುವುದಿಲ್ಲ. ಅದಕ್ಕೆ ಕಾಯ್ದಿರಿಸಿದ ಟಿಕೆಟ್ ರದ್ದುಪಡಿಸಲು ಬಂದಿರುವೆ' ಎಂದು ಕಲಬುರ್ಗಿಯ ನಿವಾಸಿ ಅಬ್ದುಲ್ ಸಾಬ್ ತಿಳಿಸಿದರು.