ಎಸ್ಬಿಐ ಕಾರ್ಯವೈಖರಿ ಬಗ್ಗೆ ಬೇಸರ: ಸಭೆಯಲ್ಲಿ ಮಾತನಾಡಿದ ಖಜಾನೆ ಇಲಾಖೆಯ ದತ್ತಪ್ಪ ಗೊಬ್ಬೂರ, ‘ಪಿಂಚಣಿಯನ್ನು ಖಜಾನೆ ಇಲಾಖೆಯಿಂದ ಬಟವಡೆ ಮಾಡಿದರೂ ಬ್ಯಾಂಕ್ನಲ್ಲಿ ಪಿಂಚಣಿದಾರರಿಗೆ ಪಾವತಿಯಾಗುವುದಿಲ್ಲ ಎಂಬ ದೂರು ಬಂದಿವೆ. ಭಾರತೀಯ ಸ್ಟೇಟ್ ಬ್ಯಾಂಕ್ನ ಆಳಂದ, ಚಿತ್ತಾಪುರ, ಮಾದನ ಹಿಪ್ಪರಗಾ ಶಾಖೆಗಳಲ್ಲಿ ಹೆಚ್ಚು ದೂರುಗಳು ಬಂದಿವೆ. ಪಿಂಚಣಿಯಲ್ಲೇ ಹಣ ಕಡಿತವಾಗುತ್ತಿದೆ. ಇದಕ್ಕೆ ಕಾರಣವೇನೆಂದು ಕೇಳಿದರೂ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂಬ ದೂರುಗಳು ಬಂದಿವೆ’ ಎಂದು ಹೇಳಿದರು.