ಸ್ವಲ್ಪ ಎಚ್ಚರ, ಜಾಗ್ರತೆ ತಪ್ಪಿದರೆ ಕಾಲು ಜಾರಿ ಬಿದ್ದರೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಸೇತುವೆ ಕೆಳ ಭಾಗದಲ್ಲಿ ಇಳಿಜಾರು ರಸ್ತೆಯಲ್ಲಿ ಎತ್ತುಗಳು ಮತ್ತು ದನಕರುಗಳನ್ನು ತೆಗೆದುಕೊಂಡು ಬಂದು ನದಿಗಿಳಿದು ಮೈ ತೊಳೆಯುತ್ತಿರುವುದು, ಪ್ರವಾಹದ ಸಮೀಪ ಆಡು, ಕುರಿಗಳನ್ನು ಕೂಡಿಸಿರುವುದು ಗುರುವಾರ ಕಂಡು ಬಂತು.