‘ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಒಳಗಾಗಿ ಕೇಂದ್ರ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಕ್ರಿಮಿನಾಶಕ ಔಷಧಿ ಬಳಸುವುದರಿಂದ ಹಿಂದಿನ ವರ್ಷಗಳಲ್ಲಿ ಬೆಳೆಗಳಿಗೆ ಸಿಂಪರಣೆ ಸಮಯದಲ್ಲಿ ಹಲವಾರು ರೈತರು ತೀರಿಕೊಂಡಿದ್ದಾರೆ. ಕಳಪೆ ಮಟ್ಟದ ಕ್ರಿಮಿನಾಶಕ ಔಷಧಿ ಮಾರಾಟವಾಗದಂತೆ ಕೂಡಲೇ ತಡೆಗಟ್ಟಬೇಕು.ಕಳಪೆ ಕೀಟನಾಶಕ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮಾಲೀಕರನ್ನು ಕೂಡಲೇ ಬಂಧಿಸಬೇಕು. ಕೀಟನಾಶಕ ಔಷಧಿಗಳನ್ನು ಮಾರಾಟ ಮಾಡುವ ಕಂಪನಿಗಳು ಮತ್ತು ಕಂಪನಿಗಳ ಡೀಲರುಗಳು ಹಾನಿಕಾರಕವಾದ ಔಷಧಿ ಮಾರಾಟ ಜಾಲವನ್ನು ತಡೆಗಟ್ಟಬೇಕು’ ಎಂದು ಒತ್ತಾಯಿಸಿದರು.