ಡಿಸಿಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತಾಲಯದ ಎಲ್ಲ ಅಧಿಕಾರಿಗಳು ಹಾಗೂ 90ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ಮಾಡಿ, ಜೈಲಿನ ಹಲವು ಕೋಣೆಗಳಲ್ಲಿ ಶೋಧ ಕಾರ್ಯ ನಡೆಸಿದರು. ಪ್ರಸ್ತುತ ಜೈಲಿನಲ್ಲಿ ಹಲವು ರೌಡಿಗಳು ಜೈಲಿನಿಂದ ಕರೆ ಮಾಡಿ, ಕೆಲವರಿಗೆ ಬೆದರಿಕೆ ಹಾಕುತ್ತಿದ್ದರು. ದಾಳಿ ವೇಳೆ ಜೈಲಿನಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ಕೈದಿಗಳ ಬಳಿ ಇದ್ದ ನಾಲ್ಕು ಮೊಬೈಲ್ ಸೇರಿದಂತೆ ನಗದು ಹಣ ಪತ್ತೆಯಾಗಿದೆ. ದಾಳಿಯಲ್ಲಿ ಸುಮಾರು ₹1.62 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್ರವಿಕುಮಾರ ತಿಳಿಸಿದ್ದಾರೆ.