ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿದ್ದರೂ ತ್ರಿಫೇಸ್ ವಿದ್ಯುತ್ ಇಲ್ಲದ್ದರಿಂದ ನೀರು ಮೇಲೆತ್ತಲು ಆಗುತ್ತಿಲ್ಲ. ಹೀಗಾಗಿ ನಮ್ಮ 4 ಎಕರೆ ಕಲ್ಲಂಗಡಿ ಬೆಳೆ ಬಾಡಿದೆ. ಜೆಸ್ಕಾಂ ಅಧಿಕಾರಿಗಳಿಗೆ ಮತ್ತು ಮಾರ್ಗದಾಳುಗಳಿಗೆ (ಲೈನ್ಮೆನ್) ಹೇಳಿದರೂ ಕೇಳುವವರೇ ಇಲ್ಲದಂತಾಗಿದೆ ಎಂದು ರೈತ ಉದಯಕುಮಾರ ಪ್ರಜಾವಾಣಿ ಎದುರು ಅಲವತ್ತುಕೊಂಡಿದ್ದಾರೆ.