‘ದೇಶದ್ರೋಹಿಗಳನ್ನು ಹುಬ್ಬಳ್ಳಿ ಕೋರ್ಟ್ಗೆ ಕರೆತಂದಾಗ, ಜನರು ಚಪ್ಪಲಿಯಿಂದ ಹೊಡೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಚಪ್ಪಲಿ ಅಲ್ಲ, ಅವರ ಮೇಲೆ ಸಗಣಿ ಹಾಕಬೇಕಿತ್ತು. ದೇಶದ ಯಾವ ಕಾಲೇಜಿನಲ್ಲಿಯೂ ಅವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಬಾರದು. ಮುಂಚೆ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು. ನಂತರ ಜಾಮೀನು ನೀಡಬಹುದಾದ ಸೆಕ್ಷನ್ ಹಾಕಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು, ಇಲ್ಲವೇ ಪೊಲೀಸ್ ಕಮೀಷನರ್ ದಿಲೀಪ್ ಅವರನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ದಾಖಲೆಗಳ ಸಮೇತ ಹೈಕೋರ್ಟ್ ಮೊರೆ ಹೋಗುತ್ತೇವೆ’ ಎಂದುಎಚ್ಚರಿಸಿದರು.