ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆ ಬಳಿಕ ನವದೆಹಲಿಗೆ ಹೋಗಿ ಎರಡು ತಿಂಗಳು ಬಿಡಾರ ಹೂಡುತ್ತೇನೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ಬಳಿಕವೇ ವಾಪಸು ಕಲಬುರ್ಗಿಗೆ ಬರುತ್ತೇನೆ. ಆದೇಶದ ಪ್ರತಿಯನ್ನು ವಿಠ್ಠಲ ಹೇರೂರ ಅವರ ಸಮಾಧಿ ಮೇಲೆ ಇಟ್ಟು, ಪೂಜೆ ಮಾಡಿದ ಬಳಿಕವೇ ಜನರ ಬಳಿ ಹೋಗುತ್ತೇನೆ’ ಎಂದು ತಿಳಿಸಿದರು.