ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವಾಲಯದಲ್ಲಿರುವ ಮೇಲಧಿಕಾರಿಗಳಿಗೆ ಅವರ ಕೆಳ ಹಂತದ ಕೆಲವು ಅಧಿಕಾರಿಗಳು ಸೇರಿಕೊಂಡು ಅನುವುಗಾರರು ತಾಂತ್ರಿಕ ಪರಿಣಿತರಲ್ಲ. ಅವರನ್ನು ಕೈಬಿಟ್ಟು, ಕೃಷಿ ಡಿಪ್ಲೊಮಾ ಕಲಿತವರನ್ನು ಹೊರ ಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ. ಖಾಸಗಿ ರಸಗೊಬ್ಬರ ಹಾಗೂ ಬೀಜ ಕಂಪನಿಯವರೇ ಕೆಲ ತರಬೇತಿಯನ್ನು ತಮ್ಮಲ್ಲಿ ಕೆಲಸ ಮಾಡುವವರಿಗೆ ಕೊಡಿಸಿರುತ್ತಾರೆ. ಅಂಥವರೇ ರೈತ ಅನುವುಗಾರರ ಬದಲು ಇವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕೆಲವರು ಕುತಂತ್ರ ನಡೆಸಿದ್ದಾರೆ. ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿಯನ್ನು ಲಂಚವಾಗಿ ಪಡೆಯುತ್ತಿರುವ ಗುಮಾನಿಗಳೂ ಇವೆ’ ಎಂದರು.