‘ನಾನು ಶಾಸಕ, ಸಚಿವ ಆಗುವ ಮುಂಚಿನಿಂದಲೂ ಒತ್ತುವರಿ ಮಾಡಿಕೊಂಡಿದ್ದರ ಬಗ್ಗೆ ಧ್ವನಿ ಎತ್ತಿದ್ದೇನೆ. ಆದರೆ, ಈಗ ಅಧಿಕಾರ ಇದ್ದರೂ ಕೆಲಸ ಮಾಡಲು ಆಗುತ್ತಿಲ್ಲ. ಇದಕ್ಕೆ ನಮ್ಮ ಜನಪ್ರತಿನಿಧಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ. ದಯವಿಟ್ಟು ಎಲ್ಲ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಪಾಲಿಕೆ ಸದಸ್ಯರು ಸಹಕಾರ ಕೊಡಬೇಕು. ಮಾಧ್ಯಮಗಳೂ ನನ್ನೊಂದಿಗೆ ಕೈಜೋಡಿಸಬೇಕು. ನಾನು ನಗರಾಭಿವೃದ್ಧಿ ಸಚಿವರ ಮುಂದೆ ಉದ್ದೇಶಪೂರ್ವಕವಾಗಿಯೇ ಈ ಮಾತು ಎತ್ತಿದ್ದೇನೆ. ಇನ್ನು ಮುಂದೆ ಯಾರೂ ತಕರಾರು ಮಾಡಬೇಡಿ’ ಎಂದು ಅವರು ಹೇಳಿದರು.