ಸಮಾಜಕಲ್ಯಾಣ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್, ‘ಇಲಾಖೆ ಉಪನಿರ್ದೇಶಕರ ಹುದ್ದೆಗಳಿಗೆ ಮುಂಬಡ್ತಿ ಹೊಂದಲು ಅರ್ಹ ಅಧಿಕಾರಿಗಳು ಇದ್ದರೂ ಗ್ರೆಡ್ –2 ವೃಂದದ ಸಹಾಯಕ ನಿರ್ದೇಶಕರನ್ನು ಸ್ವಂತ ವೇತನ ಶ್ರೇಣಿ ಮೇರೆಗೆ ಕೆಲ ಜಿಲ್ಲೆಗಳಿಗೆ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲು ಆದೇಶ ಹೊಡಿಸಲಾಗಿದೆ. ಇದರಿಂದಾಗಿ ಜ್ಯೇಷ್ಠತೆಯಲ್ಲಿ ಕಿರಿಯರಾದ ಗ್ರೂಪ್ –2 ವೃಂದದ ಅಧಿಕಾರಿಗಳಡಿ ಅವರಿಗಿಂತ ಜ್ಯೇಷ್ಠತೆಯಲ್ಲಿ ಹಿರಿಯರಾದ ಅಧಿಕಾರಿಗಳು ಅವರ ಆಧೀನದಲ್ಲಿ ಕೆಲಸ ಮಾಡುವಂತಾಗುತ್ತದೆ ಎಂಬ ಆರೋಪಗಳಿವೆ. ಹೀಗಾಗಿ ಈ ನೂನ್ಯತೆ ಸರಿಪಡಿಸಿ ನಿಯಮಾನುಸಾರ ಮುಂಬಡ್ತಿ ನೀಡಿ’ ಎಂದು ಅವರು ತಿಳಿಸಿದ್ದಾರೆ.