ಕೆಟ್ಟದ್ದಾದರೆ ನನ್ನ ತಲೆಗೆ: ‘ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ಅವರು ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದಾಗಿ ಹೇಳಿದ್ದರು. ಇದಾದ 4–5 ದಿನಗಳ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ಕಲಬುರ್ಗಿಯಲ್ಲಿ ಒಳ್ಳೆಯದಾದರೆ ಯಾರೂ ಹೇಳುವುದಿಲ್ಲ. ಕೆಟ್ಟದ್ದಾದರೆ ಅದನ್ನು ನನ್ನ ತಲೆಗೆ ಕಟ್ಟುತ್ತಾರೆ. ಮಾಲೀಕಯ್ಯ ಗುತ್ತೇದಾರ, ಡಾ. ಉಮೇಶ ಜಾಧವ, ಬಾಬುರಾವ ಚಿಂಚನಸೂರ ಸೇರಿದಂತೆ ಎಲ್ಲರೂ ನನ್ನ ತಲೆಗೆ ಕಟ್ಟುತ್ತಾರೆ’ ಎಂದು ಹೇಳಿದರು.