ಸ್ಥಳೀಯ ಪುರಸಭೆ ವತಿಯಿಂದ ಸೋಮವಾರ ಆಯೋಜಿಸಿದ್ದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಸಂಭಾವ್ಯ ಅನಾಹುತದಿಂದ ರಕ್ಷಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ನಂತರ ಕೋವಿಡ್ ಬಂದರೂ ಅದರ ಪರಿಣಾಮ ದೊಡ್ಡದಾಗಿ ಇರುವುದಿಲ್ಲ. ಈ ಬಗ್ಗೆ ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೇ ಚುಚ್ಚುಮದ್ದು ಪಡೆಯಿರಿ. ಜನರಿಗೆ ತಿಳಿಹೇಳಲು ಚುನಾಯಿತ ಸದಸ್ಯರು ಶ್ರಮಿಸಬೇಕು’ ಎಂದರು.