ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಹತ್ಯೆಯಾದ ಯುವಕನ ವಿರುದ್ದ ಹಲವಾರು ಗಂಭೀರ ಪ್ರಕರಣಗಳಿದ್ದವು. 2020ರಲ್ಲಿ ಬಿಜೆಪಿ ಸರ್ಕಾರವೇ ಆತನನ್ನ ಜೈಲಿಗಟ್ಟಿತ್ತು. ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರೇ ಇದೊಂದು ವೈಯಕ್ತಿಕ ಕಾರಣಗಳಿಂದಾಗಿ ನಡೆದ ಕೊಲೆ ಎಂದಿದ್ದಾರೆ. ಆದರೂ ಪರಿಹಾರ ಹಣ ನೀಡಿದ್ದು ಯಾಕೆ? ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ಹಣವನ್ನು ನೀಡಲಾಗಿದೆ? ಹೀಗೆ ವೈಯಕ್ತಿಕ ದ್ವೇಷಕ್ಕೆ ಮೃತಪಟ್ಟವರಿಗೆ ಇದೇ ರೀತಿ ಸರ್ಕಾರ ಪರಿಹಾರ ನೀಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.