‘ಇಲ್ಲಿನ ಐತಿಹಾಸಿಕ ಬಹಮನಿ ಕೋಟೆಯಲ್ಲಿ 300 ಅಕ್ರಮ ಮನೆಗಳಿವೆ. ಅವುಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ನಗರದ ಹಲವು ಕಡೆ ಇಂಥ ಒತ್ತುವರಿ ತೆರವು ಮಾಡಲು ಹೋದಾಗ, ಶಾಸಕರೇ ಫೋನ್ ಮಾಡಿ ತಡೆಯುತ್ತಾರೆ. ‘ಇದು ನನ್ನ ಮರಿಯಾದೆ ಪ್ರಶ್ನೆ. ಸದ್ಯಕ್ಕೆ ಮುಟ್ಟಬೇಡಿ, ನಾಲ್ಕು ದಿನದಲ್ಲಿ ನಾನೇ ತೆರವು ಮಾಡಿಸುತ್ತೇನೆ’ ಎಂದು ಭರವಸೆ ಕೊಡುತ್ತಾರೆ. ನಾನು ಇತ್ತ ಬರುತ್ತಿದ್ದಂತೆ ಜನರಿಂದ ಕೋರ್ಟ್ನಲ್ಲಿ ತಡೆಯಾಜ್ಞೆ ಹಾಕಿಸುತ್ತಾರೆ. ಇದು ಕೆಲಸ ಮಾಡುವ ಪದ್ಧತಿಯೇ?’ ಎಂದೂ ಅವರು ಖಾರವಾಗಿ ಪ್ರಶ್ನಿಸಿದರು.