ಅವರನ್ನು ಸಮಾಧಾನಪಡಿಸಲು ಸಂಘಟಕರು ಅವರನ್ನು ವೇದಿಕೆಗೆ ಆಹ್ವಾನಿಸಿದರು. ಆದರೆ, ಆಹ್ವಾನ ಪತ್ರಿಕೆಯಲ್ಲಿ ರಾಮಚಂದ್ರ ಜಾಧವ ಹೆಸರು ಇರಲಿಲ್ಲ. ಶಿಷ್ಟಾಚಾರದ ಪ್ರಕಾರ ಅವರನ್ನು ವೇದಿಕೆಗೆ ಕರೆಯುವಂತೆಯೂ ಇರಲಿಲ್ಲ. ಕರೆದಿದ್ದಲ್ಲದೇ ಮಾತನಾಡಲೂ ನಿರೂಪಕರು ಅವಕಾಶ ಕೊಟ್ಟರು. ಇದನ್ನು ಗಮನಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಈ ಟ್ವೀಟ್ ಮಾಡಿದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತಹಶೀಲ್ದಾರ್ ನೀಲಪ್ರಭಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.