‘ಬಸವರಾಜ ಅಮರಾಪುರ ಅವರು ಚಿಕಿತ್ಸೆಗಾಗಿ ಶುಕ್ರವಾರ ನಸುಕಿನಲ್ಲಿ ಪತ್ನಿ ಹಾಗೂ ಪುತ್ರಿ ಸಮೇತ ಹೈದರಾಬಾದ್ಗೆ ತೆರಳುತ್ತಿದ್ದರು. ಚಾಲಕ ಕಾರ್ ಓಡಿಸುತ್ತಿದ್ದ. ನಗರದಿಂದ ಕೆಲವೇ ನಿಮಿಷ ದೂರ ಹೋದ ಮೇಲೆ ಹುಮನಾಬಾದ್ ರಸ್ತೆಯಲ್ಲಿ ಕಾರ್ ಚಾಲಕ ಲಾರಿಯನ್ನು ಹಿಂದಿಕ್ಕಲು ಹೋದ. ಆ ಕ್ಷಣಕ್ಕೆ ಎದುರಿನಿಂದ ಇನ್ನೊಂದು ಕಾರ್ ಬರುತ್ತಿತ್ತು. ನಸುಕಿನಲ್ಲಿ ಮಂಜು ಕವಿದ ಕಾರಣ ಎದುರಿನ ಕಾರ್ ಹತ್ತಿರ ಬರುವವರೆಗೂ ಗೊತ್ತಾಗಲಿಲ್ಲ. ಕಾರ್ ಅಪಘಾತವಾಗುತ್ತದೆ ಎಂದು ತಿಳಿದಕ್ಷಣ ಚಾಲಕ ‘ಯು ಟರ್ನ್’ ಮಾಡಿದರು. ಇದರಿಂದ ಎದುರಿಗೆ ಬರುತ್ತಿದ್ದ ಕಾರ್ ನೇರವಾಗಿ ಹಿಂದಿನ ಸೀಟ್ನಲ್ಲಿದ್ದವರಿಗೆ ಗುದ್ದಿತು. ಆದರೆ, ಅಮರಾಪುರ ಅವರ ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಿಂದ ಪರಾರಿಯಾದ’ ಎಂದು ಪೊಲೀಸ್ ಮೂಲಗಳುತಿಳಿಸಿವೆ.