ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಹಂಗಾಮಿ ಕುಲಪತಿಯನ್ನು ನೇಮಕ ಮಾಡಲು ಸೇವಾ ಹಿರಿತನ ಪರಿಗಣಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳುತ್ತದೆ. ಆದರೆ, ಹಂಗಾಮಿ ಕುಲಸಚಿವ, ವಿತ್ತಾಧಿಕಾರಿ ಅಥವಾ ಪರೀಕ್ಷಾ ನಿಯಂತ್ರಕರನ್ನು ನೇಮಕ ಮಾಡಲು ಸೇವಾ ಹಿರಿತನ ಪರಿಗಣಿಸುವ ಅಗತ್ಯವಿಲ್ಲವೆಂದು ವಿ.ವಿ ನಿಯಮಗಳು ತಿಳಿಸುತ್ತವೆ. ತಮ್ಮ ನಂಬಿಕೆಗೆ ಅರ್ಹವಾದ ಯಾವುದೇ ಪ್ರಾಧ್ಯಾಪಕರನ್ನು, ಅಷ್ಟೇ ಏಕೆ ಸಹಪ್ರಾಧ್ಯಾಪಕರನ್ನೂ ಕುಲಸಚಿವ, ವಿತ್ತಾಧಿಕಾರಿ ಅಥವಾ ಪರೀಕ್ಷಾ ನಿಯಂತ್ರಕರನ್ನಾಗಿ ನೇಮಕ ಮಾಡಬಹುದು. ವಿಶ್ವವಿದ್ಯಾಲಯದ ಈ ನಿಮಯ ಗೊತ್ತಿದ್ದರೂ ಪ್ರೊ.ರುಮ್ಮಾ ಅವರು ಇಂಥ ಹೇಳಿಕೆ ನೀಡಿದ್ದು ನನಗೆ ಅಪಾರ ನೋವು ತಂದಿದೆ’ ಎಂದು ಅವರು
ಹೇಳಿದ್ದಾರೆ.