ಕಲಬುರ್ಗಿ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಯಾರಾದರೂ ಮುಟ್ಟಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರು ಹೇಳುತ್ತಾರೆ. ಹಾಗಾದರೆ, ಯಾವ ಪುರುಷಾರ್ಥಕ್ಕೆ ಇವರು ‘ಕಲ್ಯಾಣ’ ಎಂದು ನಾಮಕರಣ ಮಾಡಿದ್ದಾರೆ? ಇವರಿಗೆ ನೈತಿಕತೆ ಇದೆಯೇ?’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಟಿ.ಪೋತೆ ಪ್ರಶ್ನಿಸಿದರು.