ಸರ್ವಧರ್ಮಗಳ ಸಮಾನತೆಯ ಹರಿಕಾರನಾಗಿ, ಕನ್ನಡದ ಬೆಳವಣಿಗೆಗೆ ನೀರೆರೆದು ಪ್ರೋತ್ಸಾಹಿಸಿದ ಕನ್ನಡಿಗರ ಹೆಮ್ಮೆಯ ಅರಸ ಅಮೋಘವರ್ಷ ನೃಪತುಂಗ ಕಲೆ, ಸಾಹಿತ್ಯ, ವಾಸ್ತುಶಿಲ್ಪಗಳನ್ನು ಅತಿ ಎತ್ತಿರಕ್ಕೆ ಬೆಳೆಸಿ ಪ್ರೋತ್ಸಾಹಿಸಿದ್ದಾನೆ. ಭಾಷೆಯ ಆಧಾರದ ಮೇಲೆ ಸಾಮ್ರಾಜ್ಯ ಕಟ್ಟಿ ಆಳಿದ್ದು ರಾಷ್ಟ್ರಕೂಟರು ಮಾತ್ರ. ಸೇಡಂ ತಾಲ್ಲೂಕಿನ ಮಳಖೇಡವನ್ನು ತಾಜಧಾನಿಯನ್ನಾಗಿಸಿಕೊಂಡು ನೇಪಾಳದವರೆಗೂ ಆಳಿರುವ ಅರಸ ಅಮೋಘವರ್ಷ ನೃಪತುಂಗ. ಕನ್ನಡ ಸಾಹಿತ್ಯ ಚರಿತ್ರೆಗೆ ಅಮೋಘ ಕೊಡುಗೆ ನೀಡಿದ ನೃಪತುಂಗನ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ ಒತ್ತಾಯಿಸಿದರು.