ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಬಿಲ್‌ ಹೆಚ್ಚಳ: ಕಡಿತ ಮಾಡಲು ಒತ್ತಾಯ

ನಯೆ ಸವೇರಾ ಸಂಘಟನೆಯಿಂದ ಶಾಸಕರಿಗೆ ಮನವಿ ಸಲ್ಲಿಕೆ
Last Updated 8 ಆಗಸ್ಟ್ 2020, 4:04 IST
ಅಕ್ಷರ ಗಾತ್ರ

ಕಲಬುರ್ಗಿ: ಮಾರ್ಚ್‌ನಿಂದ ಜೂನ್‌ವರೆಗೆ ಎರಡರಿಂದ ಮುರು ಪಟ್ಟು ವಿದ್ಯುತ್ ಬಿಲ್‌ ಹೆಚ್ಚಿಗೆ ಬಂದಿದ್ದು, ಅವುಗಳನ್ನು ಸರಿಪಡಿಸಿ ಬಿಲ್ ಮೊತ್ತವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ನಯೆ ಸವೆರ ಸಂಘಟನೆ ಕಾರ್ಯಕರ್ತರು ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಕನೀಜ್ ಫಾತಿಮಾ ಅವರಿಗೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು. ಆದರೆ ಸರ್ಕಾರ ಮತ್ತು ಜೆಸ್ಕಾಂ ಅಧಿಕಾರಿಗಳು ಇದಕ್ಕೆ ಸ್ಪಂದನೆ ಮಾಡಲಿಲ್ಲ ಎಂದರು.

ಸಂಘಟನೆ ಅಧ್ಯಕ್ಷ ಮೋದಿನ ಪಟೇಲ್ ಅಣಬಿ, ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್ ಚಿತ್ತಾಪುರ, ಸೈಯದ್ ಏಜಾಜ್ ಅಲಿ ಇನಾಮದಾರ, ಸಾಯಿರಾ ಬಾನು, ಅಬ್ದುಲ್ ವಾಹಿದ್, ಮಲ್ಲಿಕಾರ್ಜುನ ನೀಲೂರ, ಖಾಲಿಕ್ ಅಹ್ಮದ್, ಮಕ್ಬುಲ್ ಅಹಮದ್ ಸಗರಿ, ಫಯಾಜ್ ಪಟೇಲ್, ಗೀತಾ ಮುದಗಲ್, ರಾಬಿಯಾ ಶಿಕಾರಿ, ರಾಫಿಯ ಸೀರಿನ್, ಫೌಜಿಯಾ ಬೇಗಂ, ಪರ್ವೀನ್ ಬೇಗಂ, ಮುಮ್ತಾಜ್ ಬೇಗಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT