ಚಿತ್ತಾಪುರದ ಅಂತಯ್ಯ ಸಾತಪ್ಪ ಕಲಾಲ ಅವರು ಸಂಘಕ್ಕೆ ಮಾರಾಟ ಮಾಡಿದ ಉದ್ದಿನ ಚೆಕ್ಗಳನ್ನು ಕೇಳಲು ಹೋದಾಗ ವ್ಯವಸ್ಥಾಪಕ ಬಸವರಾಜ ಚೆಕ್ಕಿಗೆ ತಲಾ ₹ 5 ಸಾವಿರದಂತೆ ಮೂರು ಚೆಕ್ಗಳಿಗೆ ಒಟ್ಟು ₹ 15 ಸಾವಿರ ಲಂಚವನ್ನು ನೀಡಲು ಒತ್ತಾಯಿಸಿದ್ದರು.
ಈ ಬಗ್ಗೆ ಅಂತಯ್ಯ ನೀಡಿದ ದೂರಿನ ಆಧಾರದ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಜೇಮ್ಸ್ ಮೆನೇಜಸ್ ಅವರು 18 ಮಾರ್ಚ್ 2013ರಂದು ಪ್ರಕರಣ ದಾಖಲು ಮಾಡಿಕೊಂಡು, ಅಂದೇ ಹಣ ಪಡೆಯುವ ಸಂದರ್ಭದಲ್ಲಿ ಬಲೆಗೆ ಕೆಡವಿದರು.