ಯಾದಗಿರಿ ಜಿಲ್ಲೆ ಶಹಾಪುರದ ಮಿಲನಕುಮಾರ ಹಯ್ಯಾಳಕರ ಶಿಕ್ಷೆಗೊಳಗಾದ ಯುವಕ. ನಗರದ ಖೂಬಾ ಪ್ಲಾಟ್ನ ಮಹಿಳೆಗೆ 9 ವರ್ಷಗಳ ಹಿಂದೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಆದರೂ ಪಟ್ಟುಬಿಡದ ಮಿಲನಕುಮಾರ ಗೃಹಿಣಿಗೆ ಜೀವ ಬೆದರಿಕೆ ಹಾಕಿ ಕರೆದೊಯ್ದಿದ್ದ. ಈ ಮುಂಚೆಯೂ ಮದುವೆಯಾಗುವುದಾಗಿ ತಿಳಿಸಿದ್ದ. ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ತಮ್ಮ ಮಗಳನ್ನು ಯುವಕ ಕರೆದೊಯ್ದಿರುವ ಕುರಿತು ತಾಯಿ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.