ಒಂದೇ ಸಮನೆ ಜಡಿ ಮಳೆ ಸುರಿದರೆ ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮತ್ತು ಮನೆಗಳು ಮತ್ತು ಅಂಗಡಿ ಹಾಗೂ ಪರಿಶಿಷ್ಟರ ಬಡಾವಣೆ ಮನೆಗಳಿಗೆ ನೀರು ನುಗ್ಗುವುದು ಮಾಮೂಲಾಗಿದೆ. ಅಕ್ಷರಶ: ಜನರ ನೆಮ್ಮದಿ ಹಾಳು ಮಾಡುವ ಮಳೆರಾಯನ ಕಾಟಕ್ಕೆ ಗ್ರಾಮದ 100ಕ್ಕೂ ಹೆಚ್ಚು ಮನೆಗಳು ತೊಂದರೆ ಸಿಲುಕುತ್ತವೆ. ದಿನಸಿ ಅಂಗಡಿ, ಚಹಾ ಹೋಟೇಲಗೂ ನೀರು ನುಗ್ಗುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಗೋಪಾಲರೆಡ್ಡಿ ಗೋವಿಂದನೋರ್.