‘ಸತತ ಮಳೆಗೆ ಎರಡು ವಾರಗಳಿಂದ ಪ್ರಾಕೃತಿಕ ವಿಕೋಪಗಳು ನಡೆಯುತ್ತಿದ್ದರೂ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸಭೆಯನ್ನು ನಡೆಸಿಲ್ಲ. ಶೀಘ್ರವೇ ಜಿಲ್ಲಾಮಟ್ಟದ ಸಭೆ ನಡೆಸಿ ಲೋಪದೋಷಗಳನ್ನು ತಕ್ಷಣ ಸರಿಪಡಿಸಬೇಕಿದೆ. ಉಳ್ಳಾಲ ತಾಲ್ಲೂಕಿನಲ್ಲಿ ನಿರಂತರ ಗುಡ್ಡ ಕುಸಿತ, ಕಡಲ್ಕೊರೆತ, ನೆರೆ ಸೃಷ್ಟಿಯಾಗಿದೆ. ಕಲ್ಲಾಪು, ಪಟ್ಲ, ಉಚ್ಚಿಲಗುಡ್ಡೆ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಿದವರು ಸಮರ್ಪಕವಾಗಿ ನಡೆಸದೆ ಹೆದ್ದಾರಿ ಬದಿಯ ಜನರಿಗೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ಕ್ರಮಕೈಗೊಳ್ಳಬೇಕು’ ಎಂದು ಯು.ಟಿ. ಖಾದರ್ ಆಗ್ರಹಿಸಿದರು.