‘ಬೆಳಿಗ್ಗೆ ಎಂದಿನಂತೆ ನದಿ ತೀರದಲ್ಲಿ ಬಿಂದಿಗೆಯಲ್ಲಿ ನೀರು ಹಿಡಿಯಲು ಬಂದಿದ್ದರು. ಆಗ ಆಯತಪ್ಪಿ ನದಿಯಲ್ಲಿ ಬಿದ್ದಿದ್ದಾರೆ. ಭೀಮಾನದಿಗೆ ಸೊನ್ನ ಬ್ಯಾರೇಜಿನಿಂದ 44 ಸಾವಿರ ಕ್ಯುಸೆಕ್ ನೀರು ಹೊರ ಬಿಡುತ್ತಿರುವುದರಿಂದ ನೀರು ರಭಸದಿಂದ ಹರಿಯುತಿತ್ತು. ನದಿಯ ಮಧ್ಯೆ ಭಾಗಕ್ಕೆ ಬಂದಾಗ ತೇಲುತ್ತಾ 2 ಕಿ.ಮೀ. ಸಾಗಿ ಮೈನಾಳ ಗ್ರಾಮದ ಬಳಿ ಬಂದಿದ್ದಾರೆ. ನದಿ ಮಧ್ಯೆದಲ್ಲೇ ಇದ್ದ ಬೊಡ್ಡೆ ಹಿಡಿದು ಬಹಳ ಹೊತ್ತು ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಬೆಸ್ತರು ಈಜಿಕೊಂಡು ಮಹಿಳೆಯನ್ನು ರಕ್ಷಿಸಿದರು. ವಿಜಯಲಕ್ಷ್ಮಿ ಅವರಿಗೆ ನೆಲೋಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ. ಗಾಬರಿಯಾಗಿದ್ದ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಫರಹತಾಬಾದ್ ಠಾಣೆ ಪೊಲೀಸರು ತಿಳಿಸಿದ್ದಾರೆ.