ನಗರದಲ್ಲಿ ಆಯೋಜಿಸಿದ್ದ ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟಿನ ಚಿಂತನಾ ಸಮಾವೇಶದಲ್ಲಿ ಟ್ರಸ್ಟ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ವೀರಶೈವ ಧರ್ಮ ಸಂಸ್ಥಾಪನಾಚಾರ್ಯರಲ್ಲಿ ಅಗ್ರಗಣ್ಯರಾದ ರೇಣುಕಾಚಾರ್ಯರು ಕೊಲನಪಾಕ ಸೋಮೇಶ್ವರ ಮಹಾಲಿಂಗದಲ್ಲಿ ಅವತರಿಸಿದ ಇತಿಹಾಸವಿದೆ. 18 ಜಾತಿ ಜನಾಂಗಗಳ ಮಠ ನಿರ್ಮಿಸಿ ಅವರೆಲ್ಲರಿಗೂ ಸಂಸ್ಕಾರ ಕೊಟ್ಟು ಸಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಪುರಾತನ ದೇವಾಲಯ ಇದಾಗಿರುವುದರಿಂದ ಬಹಳಷ್ಟು ಜೀರ್ಣಗೊಂಡಿದೆ. ಇದನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶವಿದೆ‘ ಎಂದರು.