ಏಪ್ರಿಲ್ 8ರಂದು ದೂರು ದಾಖಲು: ‘ಏ. 7ರಂದು ಕಲಾವಿದರೆಲ್ಲರೂ ಸಂಗೀತದ ಪೂರ್ವಾಭ್ಯಾಸದಲ್ಲಿ ತೊಡಗಿದ್ದರು. ಆಗ ಕುಡಿದು ಬಂದ ಬೀರಣ್ಣ, ಮೋಹನಕುಮಾರ, ದೇವೀಂದ್ರ ಅವರು ಸಹ ಕಲಾವಿದೆಯರೊಂದಿಗೆ ಅನುಚಿತವಾಗಿ ವರ್ತಿಸಿ, ನಿಂದಿಸಿದ್ದರು. ಬುದ್ಧಿ ಹೇಳಿದ ತಮಗೆ ಜೀವ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು’ ಎಂದು ಆರೋಪಿಸಿ ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ ಅವರು ಏಪ್ರಿಲ್ 8ರಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂವರೂ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.