ಕೊರೊನಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಿಲ್ಲೆಯನ್ನು ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಬದಲಾಯಿಸಿದ ಕಾರಣ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಅವರು, ‘ಅನಗತ್ಯವಾಗಿ ವಾಹನಗಳು ಸಂಚರಿಸುವಂತಿಲ್ಲ. ಅತ್ಯವಶ್ಯಕ ಸೇವೆಯನ್ನು ಒದಗಿಸುವ ಔಷಧ ಅಂಗಡಿ, ಆಸ್ಪತ್ರೆ, ಕಿರಾಣಿ ಅಂಗಡಿ, ಕೃಷಿ, ತೋಟಗಾರಿಕೆ ಉತ್ಪನ್ನವನ್ನು ಸಾಗಿಸುವ ವಾಹನಗಳು ಹಾಗೂ ಅಧಿಕೃತ ಪಾಸ್ಗಳನ್ನು ಹೊಂದಿರು ವವರ ಓಡಾಟಕ್ಕೆ ತೊಂದರೆ ಇಲ್ಲ’ ಎಂದರು.