ಕಲಬುರ್ಗಿ: ಮಹಾರಾಷ್ಟ್ರದ ತುಳಜಾಪುರದ ತುಳಜಾಭವಾನಿ ದೇವಸ್ಥಾನದಲ್ಲಿ ಪ್ರತಿ ವರ್ಷನವರಾತ್ರಿಅಂಗವಾಗಿ ನಡೆಯುತ್ತಿದ್ದ ಕೋಜಗಿರಿ ಪೌರ್ಣಿಮಾ ಯಾತ್ರೆಯನ್ನು ಈ ಬಾರಿ ರದ್ದುಗೊಳಿಸಲಾಗಿದ್ದು, ಅಕ್ಟೋಬರ್ 18ರಿಂದ 20ರವರೆಗೆ ಭಕ್ತರಿಗೆ ಪ್ರವೇಶವಿಲ್ಲ ಎಂದು ಶ್ರೀ ತುಳಜಾಭವಾನಿ ಮಂದಿರ ಸಂಸ್ಥಾನದ ಅಧ್ಯಕ್ಷರೂ ಆದ ಉಸ್ಮಾನಾಬಾದ್ ಜಿಲ್ಲಾಧಿಕಾರಿ ಕೌಸ್ತುಭ ದಿವೇಗಾಂವ್ಕರ್ ತಿಳಿಸಿದ್ದಾರೆ.