ಪೊಲೀಸರು ತೆರಳಿದ ಮೇಲೆ ರಾತ್ರಿ ಬಾಲಕನ ಮನೆಯತ್ತ ಬಂದ ರಾಜಕುಮಾರ, ಕೂಗಾಡಿ ಬೆದರಿಕೆ ಹಾಕಿದ್ದ. ಮನೆಯವರು ಸಮಜಾಯಿಸಿ ಕಳುಹಿಸಿದ್ದರು. ಆದರೆ ಬೆಳಿಗ್ಗೆ ಮತ್ತೆ ಅವರ ಮನೆಗೆ ಹೋಗಿ ರಂಪಾಟ ಮಾಡಿದ್ದರಿಂದ ಕೋಪಗೊಂಡ ಬಾಲಕ ರಾಜಕುಮಾರನ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ತಲೆಯಿಂದ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.