ಕಲಬುರ್ಗಿ: ನಗರದ ಸರ್ವಜ್ಞ ಪಿ.ಯು. ಕಾಲೇಜಿನಲ್ಲಿ ಇತ್ತೀಚೆಗೆ ಸಾರಿಗೆ ಇಲಾಖೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ. ಈರಣ್ಣ ಅವರು ವಿದ್ಯಾರ್ಥಿಗಳಿಗೆ ಸಂಚಾರಿ ಚಿಹ್ನೆಗಳು, ಅಪಘಾತಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಕಚೇರಿ ಅಧೀಕ್ಷಕ ಭೀಮರಾಯ, ಕಚೇರಿ ಸಿಬ್ಬಂದಿ ರತನಕುಮಾರ್ ಸಂಕನಕರ್, ಕಾಲೇಜಿನ ಆಡಳಿತ ಮಂಡಳಿಯ ಚೆನ್ನಾರೆಡ್ಡಿ ಪಾಟೀಲ, ಉಪನ್ಯಾಸಕರಾದ ಕರುಣೇಶ ಹಿರೇಮಠ, ವಿದ್ಯಾವತಿ ಪಾಟೀಲ, ಅಶೋಕ ಕಾಬಾ ಇದ್ದರು.