‘ಉದ್ಯೋಗ ಖಾತ್ರಿ ಅಡಿಯಲ್ಲಿ ಅಹೆಮದ್ ಪಟೇಲ್ ಗುಲಾಬಿ ಹೂ ಬೇಸಾಯಕ್ಕೆ ಮುಂದೆ ಬಂದಿರುವ ಏಕೈಕ ವ್ಯಕ್ತಿ. ಮಾರುಕಟ್ಟೆ ಸಮಸ್ಯೆಯಿಲ್ಲ. ಸಮೀಪದಲ್ಲಿ ಜಹೀರಾಬಾದ ಹಾಗೂ ಹೈದರಾಬಾದ್ಗೂ ಹೂ ಕಳಿಸಬಹುದಾಗಿದೆ. ಒಮ್ಮೆ ಆದಾಯ ಆರಂಭವಾದರೆ ನಿಲ್ಲುವುದೇ ಇಲ್ಲ. ರೋಗ ರುಜಿನಗಳಿಂದ ನಿರ್ವಹಣೆ ಮಾಡುತ್ತ ಸಾಗಿದರೆ ಸಾಕು ಸುಮಾರು 6ರಿಂದ 8 ವರ್ಷಗಳ ವರೆಗೂ ಹೂವಿನ ಗಿಡಗಳು ಹೂಬಿಡುತ್ತಲೆ ಸಾಗುತ್ತವೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕ ಅಜಿಮುದ್ದಿನ್.