ಕಲಬುರ್ಗಿ: 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆಯಿಂದ ಬಂದವರಲ್ಲಿ ಕೆಲವರು ಸಾಹಿತ್ಯ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರೆ ಇನ್ನು ಕೆಲವರು ಪುಸ್ತಕ ಖರೀದಿಸುವುದರಲ್ಲಿ ಮಗ್ನರಾಗಿದ್ದರು. ಮತ್ತೆ ಕೆಲವರು ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಿದರು.
ನಗರದ ಬಹಮನಿ ಕೋಟೆ, ಶರಣ ಬಸವೇಶ್ವರ ದೇವಸ್ಥಾನ, ಕೆಬಿಎನ್ ದರ್ಗಾ, ಬುದ್ಧ ವಿಹಾರ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ,ಶರಣ ಬಸವೇಶ್ವರ ದೇವಸ್ಥಾನ, ಹಫ್ತ ಗುಂಬಜ್, ಅಪ್ಪನ ಕೆರೆ, ಸಾರ್ವಜನಿಕ ಉದ್ಯಾನ... ಹೀಗೆ ವಿವಿಧೆಡೆ ಬೆಳಿಗ್ಗೆಯಿಂದಲೇ ಜನಜಂಗಳಿ ಕಂಡು ಬಂತು.
ಬಂದಾನವಾಜ್ ದರ್ಗಾ, ಶರಣಬಸವೇಶ್ವರ ದೇವಾಲಯ ಹಾಗೂ ಬುದ್ಧ ವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭೇಟಿ ನೀಡಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ರಾಜ್ಯದ ರಾಮನಗರ, ಬೆಂಗಳೂರು, ಮೈಸೂರು ಮಂಡ್ಯ, ಬಳ್ಳಾರಿ, ವಿಜಯಪುರ, ಹುಬ್ಬಳ್ಳಿ ವಿವಿಧ ಜಿಲ್ಲೆಗಳಿಂದ ಸಮ್ಮೇಳನಕ್ಕೆ ಸಾಹಿತಿಗಳು ಎಲ್ಲ ಕಡೆ ಭೇಟಿ ನೀಡಿದರು.ಇನ್ನೋಂದೆಡೆ ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಆಗಮಿಸಿ ಎಲ್ಲ ಸ್ಥಳಗಳ ಬಗ್ಗೆ ಮಾಹಿತಿ ಪಡೆದರು.