ನದಿಯ ಪ್ರವಾಹದಲ್ಲಿ ಹರಿದು ಬಂದಿರುವ ಮರಳು ಸರ್ಕಾರಕ್ಕೆ ಸೇರಿದ್ದು. ಅದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನಕ್ಕೆ ಒಪ್ಪಿಸಿ ರಾಜಧನದಲ್ಲಿ ಮಾರಾಟ ಮಾಡಲು ಸರ್ಕಾರಿ ಜಾಗದಲ್ಲಿ ದಾಸ್ತಾನು ಮಾಡಲು ಸೂಚಿಸಲಾಗಿತ್ತು. ಭಾನುವಾರ ರಾತ್ರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಉಸ್ತುವಾರಿಯಲ್ಲಿ ಮರಳನ್ನು ಟಿಪ್ಪರ್ ಮೂಲಕ ಬೇರೆಡೆಗೆ ಸಾಗಿಸಲಾಗಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದ್ದಾರೆ.