ಮರಳು ಮಾಫಿಯಾ ತಮ್ಮ ಪ್ರಭಾವ ಬಳಸಿಕೊಂಡು ಜನರ ಎಚ್ಚರಿಕೆ ಕಡೆಗಣಿಸಿ ವರ್ಷ ಪೂರ್ತಿ ಮರಳು ಲೂಟಿ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತ ಪತ್ರಿಕಾ ಹೇಳಿಕೆಗೆ ಗ್ರಾಮದ ಮುಖಂಡರಾದ ಗೌಡಪ್ಪ ಪೊಲೀಸ್ ಪಾಟೀಲ, ನಾಗರಾಜ ಶೇರಿಕಾರ, ಸಿದ್ರಾಮ ಉಚ್ಚೇದ್, ಭೀಮರಾವ ಶೇರಿಕಾರ, ಮಲ್ಲಿನಾಥ ಕಿಣಗಿ, ಶಿವಯ್ಯ ಸ್ಥಾವರ, ಸಿದ್ರಾಮ ಇಟಗಿ, ಸಿದ್ರಾಮ ಜಿ. ಶೇರಿಕಾರ, ನಾಗರಾಜ ಉಚ್ಚೇದ್, ವಿಶ್ವನಾಥ ಉಚ್ಛೇದ್ ಮತ್ತು ಸಂಗಮೇಶ ಶೇರಿಕಾರ ಸಹಿ ಹಾಕಿದ್ದಾರೆ.