ಗ್ರಾಮದ ಮುಖ್ಯಬೀದಿಗಳಲ್ಲಿ ಕಡಗಂಚಿಯ ವೀರಭದ್ರ ಸ್ವಾಮೀಜಿ ಅವರ ಪಲ್ಲಕ್ಕಿ ಉತ್ಸವವು ನಡೆಯಿತು. ಭಜನೆ, ಡೊಳ್ಳುಕುಣಿತ ಹಾಗೂ ಭಕ್ತರ ಜಯಘೋಷಗಳು ಸಂಭ್ರಮಕ್ಕೆ ಮೆರುಗು ತಂದವು. ನಂದಿಕೋಲ ಮೆರವಣಿಗೆ ಹಾಗೂ ಧ್ವಜಾರೋಹಣ ಕಾರ್ಯಕ್ರಮವು ಜರುಗಿತು. ಕಿಣಿಸುಲ್ತಾನದ ಶಿವಶಾಂತಲಿಂಗ ಸ್ವಾಮೀಜಿ, ಪಂಪಾಪತಿ ಸ್ವಾಮೀಜಿ ಗ್ರಾಮದ ಪ್ರಮುಖರಾದ ಶಿವಲಿಂಗಪ್ಪ ಕಿಣಗೆ, ಅಶೋಕ ಕಲಶೆಟ್ಟಿ, ಮಾಣಿಕ ಗೌಡೆ, ಶಿವಯ್ಯ ಸ್ವಾಮಿ, ಬಾಲಾಜಿ ಜಮದಾರ, ಚಂದು ಗೌಡೆ, ಪ್ರವೀಣ ಕಲಶೆಟ್ಟಿ ಇದ್ದರು.