ಬೆಳಿಗ್ಗೆ ದೆವಸ್ಥಾನದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಸಾಂಗವಾಗಿ ನೆರವೇರಿದವು. ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಶರಣಬಸವೇಶ್ವರರು ಬಳಸುತ್ತಿದ್ದ ಪರುಷ ಬಟ್ಟಲನ್ನು ಭಕ್ತರಿಗೆ ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಜಾತ್ರೆ ಮೈದಾನದಲ್ಲಿ ಸೇರಿದ್ದ ಕೆಲವು ಜನರಷ್ಟೇ ರಥ ಎಳೆದು ಸಂಭ್ರಮಿಸಿದರು. ಶರಣಬಸವೇಶ್ವರ ಮಹಾರಾಜ ಕಿ ಜೈ, ಜಗದ್ಗುರು ಬಸವೇಶ್ವರ ಮಹಾರಾಜ ಕಿ ಜೈ, ಹರಹರ ಮಹಾದೇವ, ಶಿವಶಿವ ಮಹಾದೇವ ಎಂದು ಘೋಷಣೆಗಳು ಮೊಳಗಿಸಿದರು.