ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಚಿಂಚೋಳಿಯವರಾದ ಡಾ.ಶಾಂತವೀರ ಅವರು ಸೇಡಂ ಪಟ್ಟಣದಲ್ಲಿ ನೆಲೆಸಿ ಇತ್ತೀಚಿನವರೆಗೂ ವೈದ್ಯಕೀಯ ಸೇವೆ ಸಲ್ಲಿಸಿದ್ದರು. ವೃತ್ತಿ ಜೀವನದಲ್ಲಿ ಸುಮಾರು 2.5 ಲಕ್ಷಕ್ಕೂ ಅಧಿಕ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಯನ್ನು ಮಾಡಿರುವ ಕಲ್ಯಾಣ ಕರ್ನಾಟಕ ಭಾಗದ ಏಕೈಕ ವೈದ್ಯರಾಗಿದ್ದರು. ಚಿಂಚೋಳಿ ಪಟ್ಟಣದ ಸ್ವಂತ ಜಮೀನಿನಲ್ಲಿ ಸೆ 29ರಂದು ಬೆಳಿಗ್ಗೆ 11.30ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದೆ.