ದಿಗ್ವಿಜಯ್ ಸಿಂಗ್ ಮತ್ತು ಅವರ ಪತ್ನಿ ಅಮೃತಾ ರಾಯ್ ಇತ್ತೀಚೆಗೆ ನರ್ಮದಾ ಯಾತ್ರೆ ಮಾಡಿದ್ದರು. ಮಧ್ಯ ಪ್ರದೇಶ ಸರ್ಕಾರ ವ್ಯಾಪಕ ಭ್ರಷ್ಟಾಚಾರ ಎಸಗಿರುವ ಬಗ್ಗೆ ಯಾತ್ರೆ ವೇಳೆ ದಿಗ್ವಿಜಯ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್ ಇತ್ತೀಚೆಗೆ ಹೇಳಿತ್ತು. 3,200 ಕಿ.ಮೀ. ದೂರದ ನರ್ಮದಾ ಪರಿಕ್ರಮ ಯಾತ್ರೆ ಏಪ್ರಿಲ್ 9ರಂದು ನರಸಿಂಗಪುರ ಜಿಲ್ಲೆಯ ಬರ್ಮನ್ ಘಾಟ್ ಪ್ರದೇಶದಲ್ಲಿ ಕೊನೆಗೊಂಡಿತ್ತು.