ಸಮಾಜದ ಕುಲದೇವತೆ ನಿಮಿಷಾಂಬಾ ದೇಗುಲ ಮೈಸೂರಿನ ಗಂಜಾಂನಲ್ಲಿದ್ದು, ಅದು ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ. ಆ ದೇವಸ್ಥಾನದ ನಿರ್ವಹಣೆಯನ್ನು ಸಮಾಜದ ಆಡಳಿತಕ್ಕೆ ಒಪ್ಪಿಸಬೇಕು. ಇಲ್ಲವೇ ಆಡಳಿತ ಮಂಡಳಿಯನ್ನು ಆರ್ಯ ಕ್ಷತ್ರಿಯ ಸಮಾಜದ ಇಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಸಮಾಜದ ವತಿಯಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಉಚಿತವಾಗಿ 10 ಎಕರೆ ಸರ್ಕಾರಿ ಜಮೀನನ್ನು ನೀಡಬೇಕು. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ವಿದ್ಯಾರ್ಥಿ ನಿಲಯ ಕಟ್ಟಿಸಿಕೊಡಬೇಕು. ಸಮುದಾಯ ಭವನವನ್ನು ನಿರ್ಮಿಸಬೇಕು. ಕೆಲವು ಕಡೆ ಸಮಾಜದ ಜಾಗ ಇದ್ದು, ಅಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಬೇಕು. ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡು ಉಪಜೀವನ ನಡೆಸುತ್ತಿರುವ ಸಮಾಜದ ಜನರಿಗೆ ಬಡ್ಡಿ ರಹಿತ ಸಾಲ ಹಾಗೂ ಶೈಕ್ಷಣಿಕ ಸಾಲ ಕೊಡುವ ವ್ಯವಸ್ಥೆ ಮಾಡಬೇಕು. ಪ್ರವರ್ಗ 1ರಲ್ಲಿರುವವರಿಗೆ ಶೇ 4ರಷ್ಟು ಮೀಸಲಾತಿ ಇದೆ. ಇದರಿಂದಾಗಿ ಸಮಾಜದವರಿಗೆ ಹೆಚ್ಚು ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ, ಆ ಪ್ರಮಾಣವನ್ನು ಶೇ 7ಕ್ಕೆ ವಿಸ್ತರಿಸಬೇಕು. ಇಲ್ಲವೇ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದರು.