ತನ್ನ ಷಂಡತನವನ್ನು ಬಚ್ಚಿಡಲು ವ್ರತದ ಮೊರೆಹೋಗುವ ನಾಯಕ, ನಾಯಕಿಯ ಸಂಬಳಕ್ಕಾಗಿಯೇ ಮದುವೆಯಾಗುವುದು, ಅದೊಂದು ತಂತ್ರ ಎಂಬ ತೀರ್ಮಾನಕ್ಕೆ ನಾಯಕಿ ಬರುವುದು, ಬೇಡದ ಮದುವೆಯಿಂದ ಹೊರಬರುವುದು ಇದೆಲ್ಲವೂ ನಾಟಕೀಯವಾಗಿಯೇ ಜರುಗುತ್ತದೆ. ಅದಾದ ನಂತರ ಸೇವೆಯನ್ನೇ ಬದುಕೆಂದುಕೊಳ್ಳುವ ನಾಯಕಿಗೆ ಮರು ಮದುವೆ ಮಾಡಿಸಿ, ಸ್ವಾವಲಂಬಿ ಬದುಕಿಗಿಂತ ಮದುವೆಯೇ ಆದ್ಯತೆಯಾಗಲಿ ಎಂಬಂತೆ ಕಾದಂಬರಿಯನ್ನು ಪೂರ್ಣಗೊಳಿಸುತ್ತಾರೆ.