<p><strong>ಕಲಬುರಗಿ:</strong> ನಗರದ ಮಕ್ತಂಪುರದ ಹೋಳಿ ಕಟ್ಟೆಯ ಸಮೀಪದ ‘ಘಂಟೋಜಿ ಗೃಹ ಉದ್ಯೋಗ’ ನಡೆಸುವ ಜಿ+1 ಮನೆಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದೆ.</p><p>ದುರಂತದಲ್ಲಿ ₹10 ಲಕ್ಷದಿಂದ ₹15 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.</p><p>ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೆ ದಟ್ಟ ಹೊಗೆ ಆವರಿಸಿತ್ತು. ಗರ್ಭಿಣಿ ಸೇರಿದಂತೆ ಐವರು ಮನೆಯಲ್ಲಿದ್ದರು. ಕೂಡಲೇ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಅಷ್ಟೋತ್ತಿಗೆ ಬೆಂಕಿಯು ಇಡೀ ಮನೆ ಆವರಿಸಿದೆ. </p><p>ಬೆಂಕಿ ಅವಘಡದಲ್ಲಿ ಗೃಹ ಉದ್ಯಮಕ್ಕೆ ಬಳಸುತ್ತಿದ್ದ ಆಹಾರ ಧಾನ್ಯಗಳು, ಫ್ರಿಡ್ಜ್, ಟಿವಿ, ಬೆಡ್, ಮಂಚ, ಫ್ಯಾನ್, ಪೀಠೋಪಕರಣ ಸುಟ್ಟು ಕರಕಲಾಗಿವೆ. ಅಂದಾಜು ₹10 ಲಕ್ಷದಿಂದ ₹15 ಲಕ್ಷದ ತನಕ ಹಾನಿಯಾಗಿರುವ ಬಗೆಗೆ ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.</p><p>ಮಧ್ಯಾಹ್ನ 12.30ರ ಹೊತ್ತಿಗೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆ 4 ಗಂಟೆ ತನಕ ಬೆಂಕಿಯನ್ನು ನಂದಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ ಕಲಶೆಟ್ಟಿ, ಸಹಾಯಕ ಅಗ್ನಿಶಾಮಕ ಅಧಿಕಾರಿ ಮರಿಲಿಂಗಪ್ಪ ಹಾಗೂ ಸಿಬ್ಬಂದಿ ಇದ್ದ ತಂಡವು ಮೂರು ವಾಹನಗಳನ್ನು ಬಳಸಿ ಕಾರ್ಯಾಚರಣೆ ನಡೆಸಿತು.</p><p>‘ಮನೆಯ ಒಂದು ಕೊಠಡಿಯಲ್ಲಿ ಪಟಾಕಿಗಳೂ ಇದ್ದವು. ಆದರೆ, ಬರೀ ಎರಡು ಬಾಕ್ಸ್ಗಳಷ್ಟು ಪಟಾಕಿ ಸುಟ್ಟಿವೆ. ಮಿಕ್ಕಿರುವ ಎಲ್ಲ ಪಟಾಕಿ ಬಾಕ್ಸ್ಗಳನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ’ ಎಂದು ಮೂಲಗಳು ಹೇಳಿವೆ.</p><p>ಈ ಮನೆಯಲ್ಲಿ ದತ್ತಾತ್ರೇಯ ಘಂಟೋಜಿ, ಸತೀಶ ಘಂಟೋಜಿ, ಶ್ರೀನಿವಾಸ ಘಂಟೋಜಿ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಮಕ್ತಂಪುರದ ಹೋಳಿ ಕಟ್ಟೆಯ ಸಮೀಪದ ‘ಘಂಟೋಜಿ ಗೃಹ ಉದ್ಯೋಗ’ ನಡೆಸುವ ಜಿ+1 ಮನೆಯಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದೆ.</p><p>ದುರಂತದಲ್ಲಿ ₹10 ಲಕ್ಷದಿಂದ ₹15 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.</p><p>ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೆ ದಟ್ಟ ಹೊಗೆ ಆವರಿಸಿತ್ತು. ಗರ್ಭಿಣಿ ಸೇರಿದಂತೆ ಐವರು ಮನೆಯಲ್ಲಿದ್ದರು. ಕೂಡಲೇ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಅಷ್ಟೋತ್ತಿಗೆ ಬೆಂಕಿಯು ಇಡೀ ಮನೆ ಆವರಿಸಿದೆ. </p><p>ಬೆಂಕಿ ಅವಘಡದಲ್ಲಿ ಗೃಹ ಉದ್ಯಮಕ್ಕೆ ಬಳಸುತ್ತಿದ್ದ ಆಹಾರ ಧಾನ್ಯಗಳು, ಫ್ರಿಡ್ಜ್, ಟಿವಿ, ಬೆಡ್, ಮಂಚ, ಫ್ಯಾನ್, ಪೀಠೋಪಕರಣ ಸುಟ್ಟು ಕರಕಲಾಗಿವೆ. ಅಂದಾಜು ₹10 ಲಕ್ಷದಿಂದ ₹15 ಲಕ್ಷದ ತನಕ ಹಾನಿಯಾಗಿರುವ ಬಗೆಗೆ ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.</p><p>ಮಧ್ಯಾಹ್ನ 12.30ರ ಹೊತ್ತಿಗೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆ 4 ಗಂಟೆ ತನಕ ಬೆಂಕಿಯನ್ನು ನಂದಿಸಿದರು. ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ ಕಲಶೆಟ್ಟಿ, ಸಹಾಯಕ ಅಗ್ನಿಶಾಮಕ ಅಧಿಕಾರಿ ಮರಿಲಿಂಗಪ್ಪ ಹಾಗೂ ಸಿಬ್ಬಂದಿ ಇದ್ದ ತಂಡವು ಮೂರು ವಾಹನಗಳನ್ನು ಬಳಸಿ ಕಾರ್ಯಾಚರಣೆ ನಡೆಸಿತು.</p><p>‘ಮನೆಯ ಒಂದು ಕೊಠಡಿಯಲ್ಲಿ ಪಟಾಕಿಗಳೂ ಇದ್ದವು. ಆದರೆ, ಬರೀ ಎರಡು ಬಾಕ್ಸ್ಗಳಷ್ಟು ಪಟಾಕಿ ಸುಟ್ಟಿವೆ. ಮಿಕ್ಕಿರುವ ಎಲ್ಲ ಪಟಾಕಿ ಬಾಕ್ಸ್ಗಳನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ’ ಎಂದು ಮೂಲಗಳು ಹೇಳಿವೆ.</p><p>ಈ ಮನೆಯಲ್ಲಿ ದತ್ತಾತ್ರೇಯ ಘಂಟೋಜಿ, ಸತೀಶ ಘಂಟೋಜಿ, ಶ್ರೀನಿವಾಸ ಘಂಟೋಜಿ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>