ಮಗುವಿನ ತಂದೆ ತಿಪ್ಪಣ್ಣ ಹೆಂಡತಿ ಇಲ್ಲದ ಕಾರಣಕ್ಕೆ ಇತ್ತೀಚೆಗೆ ಮರೆಮ್ಮ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಊರಲ್ಲಿ ಕೆಲಸ ಇಲ್ಲದ ಕಾರಣಕ್ಕೆ ತಿಪ್ಪಣ್ಣ ಮರೆಮ್ಮ ಹಾಗೂ ಸೋನಾಲಿಕಾಳನ್ನು ಸ್ಟೇಷನ್ ತಾಂಡಾದ ಮನೆಯಲ್ಲಿ ಬಿಟ್ಟು ಕುಟುಂಬದ ನಿರ್ವಹಣೆಗಾಗಿ ಪುಣೆಗೆ ವಲಸೆ ಹೋಗಿದ್ದರು. ಸ್ಥಳೀಯರ ಎದುರು ಮರೆಮ್ಮ ತಾನು ಮಾಡಿದ ಕೃತ್ಯ ಸಮರ್ಥಿಸಿಕೊಂಡಿದ್ದಾಳೆ. ಮಗುವಿನ ರೋದನೆ ಕಂಡ ಸ್ಥಳೀಯರು ಮಗುವಿನೊಂದಿಗೆ ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗುವನ್ನು 1098 ಚೈಲ್ಡ್ಲೈನ್ ಅಧಿಕಾರಿಗಳು ಕಲಬುರಗಿಯ ಶಿಶುವಿಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ.