<p><strong>ಕಮಲಾಪುರ (ಕಲಬುರಗಿ ಜಿಲ್ಲೆ)</strong>: ಶಾಲಾ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಮಹಾಗಾಂವ್ ಕ್ರಾಸ್ನ ಮೌಂಟ್ವೇವ್ ಶಾಲೆ ಆವರಣದಲ್ಲಿ ಬುಧವಾರ ನಡೆದಿದೆ.</p><p>ಮಹಾಗಾಂವ್ ಕ್ರಾಸ್ನ ನಿವಾಸಿ ಮೌಂಟವೇವ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಸಂಗಮೇಶ ಜಗನ್ನಾಥ (8) ಮೃತ ಬಾಲಕ.</p><p>ಬೆಳಿಗ್ಗೆ ಶಾಲೆಗೆ ಹೋಗಿದ್ದು , ಪರೀಕ್ಷೆ ನಿಮಿತ್ತ ತರಗತಿಗಳು ಬೇಗ ಬಿಟ್ಟಿದ್ದವು. ಸಂಗಮೇಶ ಶಾಲೆಯ ಆವರಣದಲ್ಲಿದ್ದಾಗಲೇ ಹಿಮ್ಮುಖವಾಗಿ ಚಲಿಸುತ್ತ ಬಂದ ಶಾಲಾ ವಾಹನದ ಹಿಂಬದಿ ಚಕ್ರದಲ್ಲಿ ಸಂಗಮೇಶ ಸಿಲುಕಿ, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. </p><p>ಮೂಲತಃ ಬಸವಕಲ್ಯಾಣ ತಾಲ್ಲೂಕಿನ ಯರಭಾಗ ಗ್ರಾಮದವರಾಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಜಗನ್ನಾಥ ಕುಟುಂಬ ಸಮೇತ ಮಹಾಗಾಂವ್ ಕ್ರಾಸ್ನಲ್ಲಿ ವಾಸವಾಗಿದ್ದರು. </p><p>ಇವರಿಗೆ ಸಂಗಮೇಶ ಹಾಗೂ ರಾಹುಲ್ ಎಂಬ ಇಬ್ಬರು ಮಕ್ಕಳಿದ್ದು, ಮೌಂಟ್ವೇವ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.</p><p>ಸಿಪಿಐ ಶಿವಶಂಕರ ಸಾಹು, ಪಿಎಸ್ಐ ವಿಶ್ವನಾಥ ಬಾಕಳೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p><p>ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ (ಕಲಬುರಗಿ ಜಿಲ್ಲೆ)</strong>: ಶಾಲಾ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಮಹಾಗಾಂವ್ ಕ್ರಾಸ್ನ ಮೌಂಟ್ವೇವ್ ಶಾಲೆ ಆವರಣದಲ್ಲಿ ಬುಧವಾರ ನಡೆದಿದೆ.</p><p>ಮಹಾಗಾಂವ್ ಕ್ರಾಸ್ನ ನಿವಾಸಿ ಮೌಂಟವೇವ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಸಂಗಮೇಶ ಜಗನ್ನಾಥ (8) ಮೃತ ಬಾಲಕ.</p><p>ಬೆಳಿಗ್ಗೆ ಶಾಲೆಗೆ ಹೋಗಿದ್ದು , ಪರೀಕ್ಷೆ ನಿಮಿತ್ತ ತರಗತಿಗಳು ಬೇಗ ಬಿಟ್ಟಿದ್ದವು. ಸಂಗಮೇಶ ಶಾಲೆಯ ಆವರಣದಲ್ಲಿದ್ದಾಗಲೇ ಹಿಮ್ಮುಖವಾಗಿ ಚಲಿಸುತ್ತ ಬಂದ ಶಾಲಾ ವಾಹನದ ಹಿಂಬದಿ ಚಕ್ರದಲ್ಲಿ ಸಂಗಮೇಶ ಸಿಲುಕಿ, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. </p><p>ಮೂಲತಃ ಬಸವಕಲ್ಯಾಣ ತಾಲ್ಲೂಕಿನ ಯರಭಾಗ ಗ್ರಾಮದವರಾಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಜಗನ್ನಾಥ ಕುಟುಂಬ ಸಮೇತ ಮಹಾಗಾಂವ್ ಕ್ರಾಸ್ನಲ್ಲಿ ವಾಸವಾಗಿದ್ದರು. </p><p>ಇವರಿಗೆ ಸಂಗಮೇಶ ಹಾಗೂ ರಾಹುಲ್ ಎಂಬ ಇಬ್ಬರು ಮಕ್ಕಳಿದ್ದು, ಮೌಂಟ್ವೇವ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.</p><p>ಸಿಪಿಐ ಶಿವಶಂಕರ ಸಾಹು, ಪಿಎಸ್ಐ ವಿಶ್ವನಾಥ ಬಾಕಳೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p><p>ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>