ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂಗಡ ಪತ್ರವು ದೇಶದಲ್ಲಿರುವ ತೀವ್ರ ಆರ್ಥಿಕ ಕುರಿತ ಅಣಕು ದಾಖಲೆಯಂತಿದ್ದು, ಇದರ ಹೊರೆಯನ್ನು ಹೊತ್ತು ಮಿಲಿಯಾಂತರ ದುಡಿಯುವ ಜನರ ದಿವಾಳಿಯಾಗುತ್ತಿದ್ದಾರೆ. ಕೆಲವು ‘ಸದ್ಭಾವನೆ’ಯ ಹಂಚಿಕೆಗಳಲ್ಲಿ ಅತ್ಯಲ್ಪ ಹೆಚ್ಚಳ ಅಥವಾ ವೈಯಕ್ತಿಕ ತೆರಿಗೆಗಳಲ್ಲಿ ಸಾಂಕೇತಿಕ ಕೊಡುಗೆಗಳು ಅಥವಾ 80 ಕೋಟಿ ಜನರಿಗೆ ಇನ್ನೂ ಒಂದು ವರ್ಷ ಉಚಿತ ಪಡಿತರವನ್ನು ಮುಂದುವರಿಸುವ ಕುರಿತು ಕೊಚ್ಚಿಕೊಳ್ಳುವುದು ವಂಚನೆಯಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇ 30ರಷ್ಟು ಏರಿಕೆಯಾದ ಹಣದುಬ್ಬರಕ್ಕೆ ಹೋಲಿಸಿದರೆ ಈ ಪರಿಹಾರ ತುಂಬ ಕಡಿಮೆಯಿದೆ ಮತ್ತು ಹೆಚ್ಚಿನ ಸಂಕಟವನ್ನಷ್ಟೇ ನೀಡಲಾಗಿದೆ’ ಎಂದಿದ್ದಾರೆ.