ಜೀವಣಗಿಯಲ್ಲಿನ ಮನೆಯಲ್ಲಿ ವೆಂಕಟ್ ಒಬ್ಬರೆ ವಾಸಿಸುತ್ತಿದ್ದರು. ರಾತ್ರಿ 8ಕ್ಕೆ ಪುತ್ರ ಮನೀಷ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಫೋನ್ ಕಟ್ ಮಾಡಿದ್ದರು. ಮುಂಬೈನಲ್ಲಿದ್ದ ಮನೀಷ ಜೀವಣಗಿಯಲ್ಲಿನ ತಮ್ಮ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಅವರು ತೆರಳಿ ನೋಡುವಷ್ಟರಲ್ಲಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದರಿಂದ ರಕ್ಷಿಸಲು ಆಗಿಲ್ಲ. ಬಾಗಿಲು ಮುರಿದು ನೋಡುವಷ್ಟರಲ್ಲಿ ವೆಂಕಟ್ ಸುಟ್ಟು ಕರಕಲಾಗಿದ್ದರು.