‘ರಾಜ್ಯದ ವಸತಿ ನಿಲಯಗಳಲ್ಲಿ 14,800 ಕ್ವಿಂಟಲ್ ಅಕ್ಕಿ, 4,800 ಕ್ವಿಂಟಲ್ ರವೆ, ಇಡ್ಲಿ ರವೆ, ಎಣ್ಣೆ ಇದೆ. ತರಕಾರಿಯನ್ನಷ್ಟೇ ಖರೀದಿಸಬೇಕು. ಆಶ್ರಯ ಬಯಸಿ ಬಂದವರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ ಹಾಗೂ ರಾತ್ರಿ ಊಟ ಕೊಡಬೇಕು. ಬೆಡ್ ಶೀಟ್, ಟವೆಲ್ ಖರೀದಿಸಿ ಕೊಡಿ ಮತ್ತು ಅವುಗಳನ್ನು ವಾಪಸ್ ಪಡೆಯಬೇಡಿ. ಊಟ ಹಾಕುವ ಹಾಗೂ ಆಶ್ರಯ ನೀಡುವ ವಿಚಾರದಲ್ಲಿ ಹಿಂದೆ ಮುಂದೆ ನೋಡಬೇಡಿ’ ಎಂದು ಗುರುವಾರ ಇಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.